Sunday, September 21, 2014

ನಿನ್ನ ನಿರೀಕ್ಷೆಯಲ್ಲಿ .....

                                                 ಪ್ರೀತಿಯ ಪ್ರತಿರೂಪ                     

              " ಕಾಣದ ಕಡಲಿಗೆ ಹಂಬಲಿಸಿದೆ ಮನ"  ಅನ್ನೋ ಹಾಗೆ ನನ್ನೋಳಿಗಿನ ಅಂತರತಮ ಸರ್ವಾಂತರ್ಯಾಮಿಯಂತೆ  ನನ್ನ ನಿರೀಕ್ಷೆಯ ಹಾದಿಯಲ್ಲಿ ನಿನ್ನ ಸುಳಿವು ಹಾಯಲಿ ಎಂದು ಹಂಬಲಿಸಿದೆ. ಜಿ, ಎಸ್, ಎಸ್ ಅವರ ಮೇಲಿನ ಮಾತು ಶತ ಪರಿಶತ ಎಲ್ಲರ ಜೀವನದಲ್ಲಿ ಒಂದಲ್ಲಾ ಒಂದು ಸಲ ಅನುಭವಕ್ಕೆ ಬಂದೆ ಬರುತ್ತದೆ. ಈಗ ಅದು ನನ್ನ ಅನುಭವದ ಪರ್ಚ್ಹಾಯಿಯಾಗಿದೆ. 



   

       ಈ ನಿರೀಕ್ಷೆ ಎಂಥದ್ದು ಅಂದ್ರೆ ಗೊತ್ತಿಲ್ಲದ ದಾರಿಯಲ್ಲಿ ಶರವೇಗದಲ್ಲಿ ಚಲಿಸುವ ಕಲ್ಪನೆಗಳಿಗೆ ನಿಜಾಯಿತಿ ದೊರಕಿಸಿಕೊಟ್ಟಂತೆ, ನಮ್ಮ ಡೆಸ್ಟಿನಿ ಹುಡುಕಾಟದಲ್ಲಿ ಅಲೆಮಾರಿಯಾಗಿ, ಗೊತ್ತಿರದ ಕತ್ತಲೆಯ ಲೋಕದಲ್ಲಿ ಮಿಂಚೊಂದು ಸಂಚರಿಸಲಿ ಅನ್ನುವಂತೆ. ಅರಿಯದೆ ಯಾವುದೊ ದಾರಿಯಲ್ಲಿ ನಡೆದು ಹೋಗಿ ಸರಿಯಾದ ಗೂಡು ಸೇರಲಿ ಅನ್ನುವಂತೆ...  
ಹೂಂ ........ !!!!

        ಹೀಗೆಲ್ಲ ಏನೇನೋ ಯೋಚನೆ ಮಾಡೋ ಈ ನನ್ನ ಮನಸ್ಸಿನ ಆಳದಲ್ಲಿ ಹುದುಗಿದ ಅನಂತಾನಂತ ಭಾವನೆಗಳು, ಕಲ್ಪನೆಗಳು, ಅಸ್ಥಿರ ಚಿಂತನೆಗಳು ವಾಸ್ತವದ ಸವಿರುಚಿಯನ್ನು ಸವಿಯಲು ಹಾತೊರೆಯುತ್ತ, ಆತುರದಿಂದ ನಿನ್ನ ನಿರೀಕ್ಷೆಯ ಹಾದಿಯಲ್ಲಿ ಸಂಚರಿಸುತ್ತಿವೆ, ನಿನ್ನ ನಿರೀಕ್ಷೆಯನ್ನು ಅಪೇಕ್ಷಿಸುತ್ತಿವೆ.
    
        ನನ್ನ ಅಪರಿಮಿತ ನಿರೀಕ್ಷೆಗೆ ಕಡಿವಾಣ ಹಾಕಲು, ಮನಸ್ಸಿನ ಆಳದಲ್ಲಿ ಹುದುಗಿದ  ಭಾವನೆಗಳಿಗೆ ಸ್ಪಂದಿಸಲು,  ಸರ್ವಂತರ್ಯಾಮಿಯ ಸಂಚಾರದ ಹಾದಿಯಲ್ಲಿ ದೊರೆಕಿದೆ "ನೀ", ನ್ನನ್ನೆಲ್ಲ ಸರ್ವಸ್ವದ ಹಕ್ಕುದಾರ , ನನ್ನ ಹೃದಯದ ಒಡೆಯ. ನಿನ್ನ ಹುಡುಕಾಟದಲ್ಲಿ ನನ್ನ ಜೀವನದ ಅಲ್ಪಭಾಗ ಕಳೆದುಹೋಯ್ತು, ಇನ್ನುಳಿದ ಬಹುಭಾಗ ನಿನ್ನ ಜೊತೆ ದೀರ್ಘವಾಗಿ ಕಳೆಯಬೇಕೆಂಬ ಪುಟ್ಟ ಆಸೆ. ನಾನೆಂಥ ಭಾಗ್ಯಶಾಲಿ ನನ್ನ ಅಂತರತಮ ದಲ್ಲಿ ಅಡಗಿದ ನನ್ನವನ ಕಲ್ಪನೆಗೆ ಜೀವ ತಳೆದಂತೆ, ನೀ ಇರುವೆ, ಇದು ನನ್ನ ಅರಿವಿಗೆ ಬಂದಾಗಿನಿಂದ ನೀನು "ನನ್ನವ"ನಾಗಿಬಿಟ್ಟೆ. ನಿನಗೆ ಉತ್ಪ್ರೇಕ್ಷೆಯೂ ಕಡಿಮೆ ಬೀಳುತ್ತದೆ. ನನಗೆ ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು. ನನ್ನ ಸಂತೋಷದ ಕ್ಷಣಗಳಿಗೆ ರೆಕ್ಕೆ ಬಂದು ನಾ ಕಾಯುತ್ತಿದ್ದ ಲೋಕದಲ್ಲಿ ಸ್ವಚ್ಛಂಧವಾಗಿ, ಗರಿಬಿಚ್ಚಿ ನೀರಾಳವಾಗಿ ಹಾರುತ್ತಿವೆ. 

        ನಿನ್ನ ನಾ ನೋಡಿದಾಗಿನಿಂದ ನನ್ನ ಮನಸ್ಸು ನನ್ನ ಹತೋಟಿಯ ಸಂಕೋಲೆಯಿಂದ ಇಣುಕಿ ನೋಡುತ್ತಿದೆ, ಕ್ಷಣ ಕ್ಷಣಕ್ಕು ನಿನ್ನ ಮುದ್ದು ಮುಖ ನನ್ನ ಕಣ್ಮುಂದೆ ಬಂದು ನನ್ನನ್ನು ವಿಚಲಿತನನ್ನಾಗಿ ಮಾಡುತ್ತಿದೆ. ನಾ ಕುಳಿತ ಜಾಗದಲ್ಲಿ ಅಕ್ಕ ಪಕ್ಕ ನೀ ಬಂದ ಹಾಗೆ ಭಾಸ, ನನ್ನುಸಿರಿನ  ಗಾಳಿಯಲ್ಲಿ ನೀ ಹಾಸಿಹೊಕ್ಕಂತ ಅನುಭವ, ನನಗೆ ತಿಳಿಯದೆ ನನ್ನ ಕೂಡಿದ ತುಟಿಗಳು ಅರಳುತ್ತವೆ, ಮುಖದ ಭಾವ ನಿನ್ನ ನೆನೆದಾಗಲೆಲ್ಲ ಖಳೆ ಹೊಮ್ಮುತ್ತದೆ, ಕೆನ್ನಯ ಮಧ್ಯ ನಸುನಗೆಯ ಕುಳಿ ಉಂಟಾಗುತ್ತದೆ, ಮುಂಗುರುಳು ಕಣ್ಣಂಚಲ್ಲಿ ಮರಯಾಗುತ್ತವೆ, ಹೃದಯ ಹಗುರಾಗಿ ತೇಲುತ್ತದೆ. :)

         ಇದೆಂಥ ಅದ್ಭುತ ಅನುಭವ..!!! ಹಾಸುಗಲ್ಲಿಗೊಂದು ಜೀವ ಬಂದಂತೆ, ಉರಿಬಿಸಿಲು ತಂಪನೆಯ ತಂಗಾಳಿ ಸೂಸಿದಂತೆ, ಚಿರ್ರೊ-ಬರ್ರೊ ಅನ್ನೋ ಕರ್ಕಶ ಶಬ್ದ ಕಿವಿಗೆ ಇಂಪಾಗಿ ಕೇಳಿದಂತೆ, ನಡು ಬಿಸಿಲಿನ ಸೂರ್ಯ ನನ್ನನೋಡಿ ನಸುನಕ್ಕಂತೆ, ಇರುಳ ಚಂದ್ರ ತನ್ನಲ್ಲಿಗೆ ನನ್ನ ಕರೆದಂತೆ, ಈ ಎಲ್ಲ ಅಂತೆ- ಕಂತೆಗಳು ನನ್ನ ಮನಸ್ಸಲ್ಲಿ ನಿನ್ನ ಇರುವಿಕೆಯನ್ನು ಒತ್ತಿ ಹೇಳುತ್ತಿವೆ.... !!

        ನಿನ್ನ ಅಪೇಕ್ಷಿತ ನಿರೀಕ್ಷೆಯ ಹಬೆಯಲ್ಲಿ ಬೇಯಿತ್ತಿರುವೆ  ನಾನು, ಆದ್ರೆ ಅಷ್ಟು ಸುಲಭದಲ್ಲಿ ಈ ನಿರೀಕ್ಷೆ ಮುಗಿಯುದಿಲ್ಲ, ಎಲ್ಲಕ್ಕೂ ಕಾಲ ಕುಡಿ ಬರಬೇಕು. ನನ್ನ ಜೀವನವೇ ಚಿತ್ರ-ವಿಚಿತ್ರಗಳ , ಶೇಷ- ವಿಶೇಷಗಳ ಆಗರ. ನೀ ನನಗೆ ದೊರಕಿರುವುದು ಒಂದು ಮಿರಾಕಲ್ಲೇ ಸರಿ, ಈ ವಿಶ್ವದ ಯಾವುದೊ ಒಂದು ಅಭಿನಾವ ಜಾಗದಲ್ಲಿ ಇರುವ ನೀನು ನನ್ನ ಮನಸ್ಸಿನ ಜಾಲದಲ್ಲಿ ಸಿಲುಕಿಕೊಂಡು ಬಿಟ್ಟೆ, ನಿನ್ನ ನಾ ಹೊರಬಿಡುವ ಮಾತೆ ಇಲ್ಲ. :D 

       ಅದು ಏನೋ ತಿಳಿಯುತ್ತಿಲ್ಲ, ನಿನ್ನ ಜೊತೆ ಮಾತಾಡಬೇಕು,ನಗಬೇಕು, ನನ್ನ ದಿನಚರಿ ನಿನ್ನ್ಮುಂದೆ ಹೇಳ್ಬೇಕು, ಚಿರು ಮಳೆಯ ಹನಿಗಳಲ್ಲಿ ನಿನ್ನ ಜೊತೆ ನೆನಿಬೇಕು, ತಂಪನೆಯ ತಂಗಾಳಿಯಲ್ಲಿ ಸಂಜೆ ನಿನ್ನ ಹೆಜ್ಜಯ ಬದಿ ನನ್ನ ಹೆಜ್ಜೆ ಇಡ್ಬೇಕು, ಆ ತಂಗಾಳಿಯ ಅಲೆಗಳಿಗೆ ಸರಿದಾಡುವ ನನ್ನ ಮುಗುರಳನ್ನ ನೀ ತಿಡ್ಬೇಕು, ಇನ್ನು ಅದೇನೇನೋ ಹುಚ್ಚು ಆಸೆಗಳು, ಈ ಹುಚ್ಚು ಕೆಲವೊಮ್ಮೆ ಅತಿರೇಕ ಅನಿಸುತ್ತದೆ ಆದ್ರೆ ಅದೇನೋ ಖುಷಿ, ರೋಮಾಂಚನ,ಸ್ಪಂದನ ಈ ಹುಚ್ಛುತನದಲ್ಲಿ. ನನಗೂ  ಗೊತ್ತು ಈ ಫೀಲಿಂಗ್ಸ್ ಎಲ್ಲ ಅನುಭವಕ್ಕೆ ಬರಲು ಸರಿಯಾದ ಸಮಯ ಮುಂದೆ ಇದೆ, ಆ ಅದ್ಭುತ ಕ್ಷಣಕ್ಕಾಗಿ ಎದುರು ನೋಡೋಣ, ಕಾಯೋಣ ಅಂತ, ಆದ್ರೆ ಈ ಹರೆಯದ ಮನಸ್ಸು ಕಾಲದ ಕುದುರೆ ಏರಿ ಶರವೇಗದಲ್ಲಿ ಸಾಗುತ್ತಿದೆ. ಈ ಎಲ್ಲ ಫೀಲಿಂಗ್ಸ್ ಅನುಭವಕ್ಕೆ ಬರುವತನಕ ಇದಕ್ಕೆ ಒಂದು ಮೂಗುದಾರ, ಕಡಿವಾಣ ಬೇಕು, ಆ ಕಡಿವಾಣ ಸದಾಕಾಲ ನನ್ನ ಮನಸ್ಸಿನಲ್ಲಿ ನಿನ್ನ ಇರುವಿಕೆಯಾಗಿರಬೇಕು. 
                                        

     ಪ್ರತಿ ಅಣಿ ಕ್ಷಣಕ್ಕು ನಿನ್ನದೇ ಧ್ಯಾನ, ನಿನ್ನದೇ ಜಪ, ಇದೆಂಥ ಮೋಡಿ...!!! ಈ ಪ್ರೀತಿ, ಪ್ರೇಮ ಎಲ್ಲವು ಕಾಲದ ಪರಿಮಿತಿಗೆ ತಕ್ಕಂತೆ ಬದಲಾಗಿ ನಮ್ಮ ನಮ್ಮ ವಾಸ್ತವದ ಅನುಭವಕ್ಕೆ ಬರಿತ್ತ್ಹವೇ ಅಂತ ಹಿಂದೆಂದು ಯಾವುದೇ ಪ್ರೀತಿಯ ಬಲೆಗೆ ಬೀಳದೆ ಇದ್ದ ನನಗೆ "ಪ್ರೀತಿಯ" ಆ ಸುಂದರ ಅನುಭವ ಅಂಕುರಿಸಿ ನನ್ನ ವಾಸ್ತವದ ಪರಿಕಲ್ಪನೆಯಗತೊಡಗಿದೆ. ಪ್ರೀತಿ ಹುಟ್ಟೋಕೆ ದಿನ-ವರ್ಷ-ಯುಗಗಳು ಬೇಕಾಗಿಲ್ಲ ನಿಜವಾದ ಪ್ರೀತಿ ಹುಟ್ಟಲು ಒಂದು ಕ್ಷಣ  ಸಾಕು, ಆ ಅದ್ಭುತ ಕ್ಷಣ ನನ್ನ ಜೀವನದ ಅವಿಸ್ಮರಣೀಯ "ಕ್ಷಣ" ವಾಗಿಬಿಡ್ತು. ಇದೆಲ್ಲ ದೈವೆಚ್ಛೆ, ಮೇಲಾಗಿ ನನ್ನ ನಿನ್ನ ಋಣಾನುಬಂಧ.. 
                                           
      ಋಣಾನುಬಂಧ ಅಂದ ತಕ್ಷಣ ನಂಗೆ ನೆನಪಾಗೋದು "ಋಣಾನುಬಂಧ ರೂಪೇಣ ಪತಿ-ಪತ್ನಿ ಸುತಾಲಯ" ಈ ಮಾತಲ್ಲಿ  ನನಗೆ ಶತ ಪ್ರತಿಶತ ನಂಬಿಕೆ ಉಂಟು. ಯಾವುದೇ ಸಂಬಂಧಗಳು ಕಾರಣವಿಲ್ಲದೆ ಹುಟ್ಟುವುದಿಲ್ಲ , ಅದು ಕಾಲನಿರ್ಣಾಯಕನ ಆಟದ ಸಂಕೋಲೆಯಲ್ಲಿ ಮಿಂದು , ನಮ್ಮ-ನಮ್ಮ ಅಭಿನಾಭಾವ ಮನೋಭಾವದಲ್ಲಿ ಚಿರಸ್ಥಾಯಿಯಂತೆ ಬೆರೆತು ಹೋಗುತ್ತವೆ. ಅದೇ ನಮ್ಮನ್ನೆಲ್ಲ ಒಂದು ಬಂಧನದಲ್ಲಿ ಕೂಡಿ ಹಾಕುತ್ತದೆ. 

                                          

     ನನ್ನ ಕಾಲನಿರ್ಣಾಯಕ ತಿಳಿಸಿಯಾಯ್ತು ನೀನೆ ನನ್ನೀ ಜನ್ಮದ "ಕಲ್ಪನೆ", ನಿನ್ನೀ ಹುಟ್ಟು ನನಗಾಗಿಯೇ ಎಂದು :).
ಈ ವಿಧಿ ಮಹರಾಯ, ಕಾಲನಿರ್ಣಯಕ ಅಂತ ನಾವ್ ಏನ್  ಹೇಳ್ತಿವಿ ಅವನು ಮಾಯಜೀವಿ, ಅವನು ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲವನ್ನು ಕೊಟ್ಟು ಅದನ್ನು ನಮ್ಮದಾಗಿಸಿಕೊಳ್ಳಲು ಇನ್ನೂ ಕಾಯಿಸುತ್ತಾನೆ.

        ಹೂಂ ...!!! ನಾ ನಿನಗಾಗಿ ಪ್ರತಿದಿನ, ಪ್ರತಿಕ್ಷಣ ಕಾಯ್ತೀನಿ. ನಾ ನಿನ್ನ ಮಿಸ್ ಮಾಡಿದಷ್ಟು ಬೇರೆ ಯಾರು ಅಷ್ಟು ಮಿಸ್ ಮಾಡಿರಲಿಕ್ಕಿಲ್ಲ, ಇದು ಜಾಸ್ತಿ ಉತ್ಪ್ರೆಕ್ಷೆ ಅನ್ನಿಸಬಹುದು ಆದರೆ ಅದೇ ನಿಜ  :) ನಾ ಮುಂಚೆ ಹೇಳಿದ ಹಾಗೆ ನನ್ನ ಜೇವನದ ಅಲ್ಪಭಾಗ ನಿನ್ನ ಹುಡುಕಲು ಕಳೆದೆ, ಉಳಿದ ಬಹುಭಾಗ ನಿನ್ನ ಜೊತೆ ಕಳೆಯಬೇಕಾಗಿದೆ. ನನ್ನ ಅಪರಿಮಿತ ನಿರೀಕ್ಷೆಗೆ ಕೊನೆ ಸಿಕ್ಕಿತು, ನನ್ನೀ ಬಾಳಿನ ಅದ್ಭುತ ಕಲ್ಪನೆ ರೂಪತಳೆದಾಯ್ತು. ಇನ್ನೇನು ಹೆಚ್ಚಿನ ಅಪೇಕ್ಷೆ ಇಲ್ಲ , ನನ್ನ ಜೀವನದುದ್ದಕ್ಕೂ ಕೊನೆತನಕಾನೂ ಪ್ರೀತಿಯ ನೆರಳಲ್ಲೇ ಬದುಕಬೇಕು. ಒಲವು , ಕರುಣೆ, ಪ್ರೀತಿ , ತಾಳ್ಮೆ ಈ ಎಲ್ಲವುಗಳ ಅರ್ಥ , ಅಂದ , ಚಂದಗಳು ನಮ್ಮ ಜೀವನವನ್ನು ಅಲಂಕರಿಸಲಿವಂತಾಗಲಿ. ಬೇರೆ ಯಾವುದೇ ರೀತಿಯ ಕೆಟ್ಟ ದ್ರಷ್ಟಿ ಸೋಕದಂತಾಗಲಿ. 

     ಕೊನೆಯದಾಗಿ ಬೇಂದ್ರೆ ಯವರ ಮಾತು ಇಲ್ಲಿನ ಸಂದರ್ಭಕ್ಕೆ ತೀರ ಅರ್ಥಕೊಡುತ್ತದೆ ..... 

                                  "ಕನಸ್ಸಿನ ತೆರೆಯನ್ನು ಸರಿಸುವ ಸಂಭ್ರಮ 
                                  ಮನಸ್ಸಿನ ಮಳೆಯಲಿ ಮೀಯುವ ಸಂಭ್ರಮ 
                                  ಮೋಡದ ಮರೆಯಲಿ ಮಾತಿನ ಸಂಗಮ 

                                  ಇಳೆಯ ಮೇಲೆ ಒಲವ ಮಳೆಯ ಸಂಭ್ರಮ 
                                  ಸವಿನೆನಪುಗಳು ಚಿಗಿರುವ ಸಂಭ್ರಮ 
                                  ಚಂದ್ರನ ನೆರಳಲಿ ಮೌನದ ಸಂಗಮ 

                                  ದೂರ ತೀರದಲಿ ನಲುಮೆಯ ಸಂಭ್ರಮ 
                                  ಹೆಜ್ಜೆ ಹೆಜ್ಜೆಗೂ ಸ್ನೇಹದ ಸಂಭ್ರಮ 
                                  ಉಸಿರು ಉಸಿರಲಿ ಪ್ರೀತಿಯ ಸಂಗಮ"


                                 -------------- Live long life with 'Love', 'Grace' and 'Gratitude'.

1 comment:

  1. Words can reveal everything.
    Way of expression leads the way to earn everyone.

    Good one Sis.

    ReplyDelete